ನುಡಿವುದೊಂದು ನಡೆವುದೊಂದು
ನಡುವಿನಲ್ಲಿ ನೆಡುವುದೊಂದು
ಹಡೆವುದೊಂದು ಒಡೆವುದೊಂದು
ಮುಗಿದ ಮೇಲೆ ತರುವುದೊಂದು
ಆದಿಯೊಂದು ಅಂತ್ಯವೊಂದು
ಆಸೆಯಿಟ್ಟು ಮುಡಿಸಿದೊಂದು
ಮೂರ್ಖಜನರು ನಂಬಲೆಂದು
ಹಬ್ಬವಿಲ್ಲ, ಬರೀ ಯುದ್ಧವಿಂದು
ಇರುವ ವೇಳೆ ಇಲ್ಲ ಒಂದೂ
ಸತ್ತ ಮೇಲೆ ಕೊಡುವುದೊಂದು
ಹೆಸರ ಕಲ್ಲ ಕೆತ್ತಲೆಂದು
ಪೂವ ಹಾಕಿ ಮುಗಿಸಿದಂದು
ಯಾನವೊಂದು ತಾಣವೊಂದು
ಕುಡಿತದಲ್ಲೇ ಮಗ್ನರೆಂದು
ಕಾಲನೆಳೆದು ನಗುವುದೊಂದು
ಇದೇ ರಾಜಕೀಯ ಕುತಂತ್ರವಿಂದು
This comment has been removed by a blog administrator.
ReplyDeleteThis comment has been removed by a blog administrator.
ReplyDeleteolleya kavana.padagalanna chennagi balasiddeeri:)
ReplyDelete