Thursday, January 29, 2009

ನನ್ನವಳಿಗಾಗಿ

ನಾನು ಬರೆವ ಕವನಗಳಲಿ ನಿನ್ನ ಪಾಲೆ ಹೆಚ್ಚು ಹೆಚ್ಚು
ನಿನ್ನ ತನವು ನಿನ್ನ ಮನವು ಕಣ್ಣ ಮುಂದೆ ತುಂಬಾ ಅಚ್ಚು
ಸಾಲುಗಳಿಗೆ ಕೊರತೆಯಿಲ್ಲ, ಬರೆದೆ ನಿನ್ನ ವರ್ಣಿಸೆಲ್ಲ
ಎಂತ ಮಧುರ, ಎಂತ ಮಧುರ, ನಿನ್ನ ಬಗೆಗೆ ಬರೆದುದೆಲ್ಲ..

ನೀನೆ ತಾನೆ ನನ್ನ ಕೀರ್ತಿ, ನೀನೆ ನನ್ನ ಪ್ರಾಣ ಸ್ಫೂರ್ತಿ
ಕೇಳೆ ಚೆಲುವೆ, ಕೇಳೆ ಒಲವೆ, ನಿನ್ನ ಮನವ ನಾನು ಗೆಲುವೆ
ಎಂದೂ ಬಿಡದ ಹಾದಿಯಿಹುದು, ಬಾಳ ಯಾನ ಸಾಗುತಿಹುದು
ದೈವ ಕೊಟ್ಟ ಶಕ್ತಿಯಲ್ಲಿ ಮನದ ಮಾತು ಕುಂದದಿಹುದು..

ವಿದ್ಯೆ ಕಲಿಯಲಿಲ್ಲ ನಾನು, ಅದಕೆ ಇಂತ ಕೋಪವೇನು?

ಎಲ್ಲ ದೈವ ಲೀಲೆಯು.. ಎಲ್ಲ ಅವನ ಲೀಲೆಯು
ಬಾಳ ಪುಟದಿ ಯಾವ ಬದುಕೋ, ಯಾವ ಕ್ಷಣದಿ ಯಾರ ಬೆಳಕೋ?
ಇಂದು ದಿನವು ಸತ್ಯವು.. ಸಿಗಲಿ ಒಳಿತು ನಿತ್ಯವೂ..

ಬರೆಯಲಿಲ್ಲವಲ್ಲ ನಾನು, ಕವಿಗಳಂತೆ ಕವಿತೆಯನ್ನು

ಹೇಳ ಪರಿಯೇ ತಿಳಿಯದು.. ಹೇಳ ಪರಿಯೇ ತಿಳಿಯದು..
ಆದರೇಕೋ ಇಂಥ ಮೋಹ, ಪುಟದಿ ಗೀಚೊ ಪೂರ್ಣ ದಾಹ
ಹಾಳೆ ತುಂಬ ಬರೆದುದು.. ನಿನ್ನ ಬಗೆಗೆ ಬರೆದುದು..

ಬರೆದ ಕವನ ಮೌನವಾಗಿ, ನಿನ್ನ ಮನದ ಕದಕೆ ತಾಗಿ

ಒಂದು ದಿನವು ಸೇರ್ಪುದು.. ಮನದ ಕೋಣೆ ಸೇರ್ಪುದು
ಹಸಿರು ಪ್ರೀತಿ ಚಿಗುರಪೊರೆದು, ಮೊಗ್ಗಿನಲ್ಲಿ ನಗುವ ಬಿರಿದು
ನನ್ನ ಕಾದು ಕುಳಿಪುದು.. ದಾರಿ ಕಾದು ಕುಳಿಪುದು..

1 comment:

  1. padya yavgalu odhiskobeku....evella odhlike bore anistive....words jothe ata adi....innastu chennagi bariri..

    ReplyDelete