ಹೋಗಲಾರೆ ನೀ ಕೊಂಡೊಯ್ದು
ಸತ್ತ ಮೇಲೆ ತಳವನು
ಮಾಂಸ ಮೂಳೆ ತೊರೆದು ಕೊನೆಗೆ
ಆತ್ಮ ಸೇರ್ವುದು ಮತ್ತೊಂದನು.
ಯಾವ ಜೀವಕೆನಿತು ನೀನು
ಧರ್ಮದೊಳಗೆ ತಿಳಿಯದು
ಕೊಡುವನವನು ದೇವನೊಬ್ಬ
ಅರಿವಿದ್ದರೆ ಸುಖ ದೊರೆವುದು..
ಧರ್ಮ-ಕರ್ಮದೊಳಗೇನು ಬಲ್ಲೆ?
ನೀನೆ ರಚಿಸಿದ ಬಲೆಯದು
ಸ್ವಾರ್ಥವೆಂಬ ಮದಕೆ ಸಿಕ್ಕಿ
ಪ್ರಜ್ಞೆ ಕಳೆವ ಬಗೆಯಿದು
ನಿನ್ನ ರಕುತ ಹರಿಯಲೆನಗೆ
ಭೇದ ಮಾಡಿ ಹೊರಬರುವುದೇ?
ಹಿಂದೂ, ಕ್ರೈಸ್ತ, ಮುಸಲ್ಮಾನರೆಂದು
ಫಲಕ ಎತ್ತಿ ಹಿಡಿವುದೇ?
ಜಗದ ಉಚ್ಚ ಸ್ಥಾನದಲ್ಲಿ
ನಿನ್ನ ಬಾಳು ಬೆಳಗಲಿ
ನಿನ್ನ ನೆರವಿನಿಂದ ಜಗಕೆ
ಸಹಾನುಭೂತಿ ಮಿನುಗಲಿ
No comments:
Post a Comment